WebDuniya - ಹೈದರಾಬಾದ್: ಶ್ರೀಮಂತ ದೇವರು ಎಂದು ಜಗದ್ವಿಖ್ಯಾತಿ ಪಡೆದಿರುವ ತಿರುಪತಿ ಬಾಲಾಜಿಗೂ ವಿಮೆ. ಹೌದು, ತಿರುಮಲ ಬೆಟ್ಟದಲ್ಲಿರುವ ಎಲ್ಲಾ ದೇವಸ್ಥಾನಗಳು ಮತ್ತು ಅಲ್ಲಿನ ರಾಶಿ ರಾಶಿ ಚಿನ್ನಾಭರಣಗಳಿಗೆ 52,000 ಕೋಟಿ ರೂಪಾಯಿಗಳ ವಿಮೆ ಮಾಡಲಾಗುತ್ತಿದೆ.
ಪ್ರತಿದಿನ 70,000ಕ್ಕೂ ಹೆಚ್ಚು ಭಕ್ತಾದಿಗಳು ದರ್ಶನ ಮಾಡುತ್ತಿರುವ ತಿರುಪತಿ ಬಾಲಾಜಿ ದೇವಳಕ್ಕೆ ಪ್ರತಿ ತಿಂಗಳು ಹುಂಡಿ, ಟಿಕೆಟ್ ಮಾರಾಟ, ಲಡ್ಡು ಮತ್ತಿತರ ಮೂಲಗಳಿಂದ 10 ಕೋಟಿ ರೂಪಾಯಿಗಳ ಆದಾಯವಿದೆ.
WebDuniya - ಬರೇಲಿ: ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ (ಟ್ರಾಫಿಕ್) ಕಲ್ಪನಾ ಸಕ್ಸೇನಾ ಇದೀಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕೈ ಮುರಿತಕ್ಕೊಳಗಾಗಿದ್ದು, ತಲೆಗೂ ಏಟಾಗಿದೆ.