
| ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪುತ್ರ ಹಾಗೂ ಬಹುಭಾಷಾ ನಟ ಮುರಳಿ ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಬುಧವಾರ(ಸೆ.8) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ನಸುಕಿನ 4 ಗಂಟೆ ಸಮಯದಲ್ಲಿ ಅವರು ಸಾವಪ್ಪ್ಪಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಮುರಳಿ ಗುರುತಿಸಿಕೊಂಡಿದ್ದರು. ಭಾನುವಾರವಷ್ಟೆ ಅವರ ಮಗಳ ನಿಶ್ಚಿತಾರ್ಥ ನಡೆದಿತ್ತು. ಕನ್ನಡದ 'ಪ್ರೇಮ |
| ಲಖನೌ, ಸೆ. 8 : ತೀವ್ರ ಕುತೂಹಲ ಕೆರಳಿಸಿದ್ದ ವಿವಾದಿತ ರಾಮಜನ್ಮಭೂಮಿ ಬಾಬ್ರಿ ಮಸೀದಿ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಸೆಪ್ಟೆಂಬರ್ 24 ರಂದು ಘೋಷಿಸಲಾಗುವುದು ಎಂದು ಲಖನೌನ ಅಲಹಾಬಾದ್ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಸ್ ಯು ಖಾನ್, ನ್ಯಾ. ಸುಧೀರ್ ಅಗರವಾಲ್ ಮತ್ತು ನ್ಯಾ. ಧರಂವೀರ ಶರ್ಮಾ ನೇತೃತ್ವದ ವಿಶೇಷ ನ್ಯಾಯಪೀಠ ಮಂಗಳವಾರ ವಿಚಾರಣೆ |
| ಲಂಡನ್: ಸದ್ಯದ ಸ್ಥಿತಿಯಲ್ಲಿ ಯುರೋಪ್ ಖಂಡದಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಾಬಲ್ಯವೇ ಇದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಯುರೋಪ್ನಲ್ಲಿ ಇಸ್ಲಾಮ್ ಸಮುದಾಯವೇ ಮೇಲುಗೈ ಸಾಧಿಸಲಿದೆ ಎಂದು ಇಟಾಲಿಯನ್ ಪಾದ್ರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. |
| ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿ ಬಿದ್ದಿದ್ದ ಬೆಂಗಳೂರಿನ ಇಬ್ಬರು ಯುವತಿಯರನ್ನು ಹರಸಾಹಸಪಟ್ಟು ಪೊಲೀಸರು ರಕ್ಷಿಸಿದ್ದಾರೆ. ಇಲ್ಲಿಗೆ ಭೇಟಿ ನೀಡಿದ್ದ ಗ್ರಾಹಕನೊಬ್ಬ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಸೆಂಟ್ರಲ್ ದೆಹಲಿಯಲ್ಲಿನ ವೇಶ್ಯಾಗೃಹವೊಂದರಲ್ಲಿ 20ರ ಆಸುಪಾಸಿನ ಇಬ್ಬರು ಬೆಂಗಳೂರು ಯುವತಿಯರು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದಾರೆ ಎಂದು ಅಲ್ಲಿಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬ ಪೊ |
| ಚೆನ್ನೈ: ತಮ್ಮ ನಾಯಕಿ ಜಯಲಲಿತಾ ಅವರಿಗೆ ಜೀವ ಬೆದರಿಕೆಗಳಿದ್ದರೂ ಈ ಕುರಿತು ತಮಿಳುನಾಡು ಸರಕಾರವು ಜಡತ್ವ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಸಂಸದರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ, ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದಿದೆ. ಪತ್ರಗಳ ಮೂಲಕ ಜೀವ ಬೆದರಿಕೆಗಳು ಮುಖ್ಯಮಂತ್ರಿ, ಕೇಂದ್ರ ಗೃಹಸಚಿವರು ಮತ್ತು ಇತರ ನಾಯಕರುಗಳಿಗೆ ಬರುವುದು ಸಾಮಾನ್ಯ. ಆದರೂ ಇದನ್ನು ನಾವು ನಿರ್ಲಕ್ಷಿಸುತ್ತಿಲ್ಲ. ಇಂತಹ ಪ್ರಕರಣಗಳನ್ನು . . . |
| ಬೀಜಿಂಗ್: ಟಿಬೆಟ್ಗೆ ಪ್ರಸಕ್ತ ಸಾಲಿನಲ್ಲಿ ಐದು ಮಿಲಿಯನ್ಗಿಂತಲೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ.43.9ರಷ್ಟು ಹೆಚ್ಚಳವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. |
| ಅಹಮದಾಬಾದ್: ಕೇಂದ್ರ ಗೃಹಸಚಿವ ಪಿ. ಚಿದಂಬರಂ 'ಕೇಸರಿ ಭಯೋತ್ಪಾದನೆ' ಎಂಬ ಉಕ್ತಿಯನ್ನು ಬಳಸುವ ಮೂಲಕ ವಿವಾದಕ್ಕೆ ತುತ್ತಾಗಿರುವುದು ಗುಜರಾತ್ ವಿಧಾನಸಭೆಯಲ್ಲೂ ಗದ್ದಲಕ್ಕೆ ಕಾರಣವಾಗಿದೆ. ಈ ಕುರಿತು ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪರಸ್ಪರ ದೋಷಾರೋಪಣೆಗಳನ್ನು ಮಾಡಿದ್ದಾರೆ. ಸಚಿವರ ವಿವಾದಿತ ಹೇಳಿಕೆಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಕೇಸರಿ ಬಣ್ಣದ ಜತೆ ಸಮ್ಮಿಳಿತಗೊಳಿಸಿರುವ ಚಿ |
| ಪುಣೆ: ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರು ಎಂದು ಹೇಳಲಾಗಿರುವ ಇಬ್ಬರು ವ್ಯಕ್ತಿಗಳನ್ನು ಮುಂಬೈ ಉಗ್ರ ನಿಗ್ರಹ ದಳ ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದಲ್ಲಿ ಬಂಧಿಸಿದೆ. ಹಿಮಾಯತ್ ಬೇಗ್ ಎಂಬಾತನನ್ನು ಔರಂಗಾಬಾದ್ನಲ್ಲಿ ಹಾಗೂ ಬಿಲಾಲ್ ಎಂಬಾತನನ್ನು ನಾಸಿಕ್ನಲ್ಲಿ ಬಂಧಿಸಲಾಗಿದೆ. ಇಬ್ಬರಿಂದಲೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. |
| ತಿರುಚನಾಪಳ್ಳಿ: ಕರ್ನಾಟಕವು ಸಾಕಷ್ಟು ಕಾವೇರಿ ನೀರನ್ನು ರಾಜ್ಯಕ್ಕೆ ಹರಿಸದೇ ಇದ್ದರೆ ಕೇಂದ್ರ ಸರಕಾರದ ಮೊರೆ ಹೋಗುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಬುಧವಾರ ತಿಳಿಸಿದ್ದಾರೆ. ನ್ಯಾಯಾಧಿಕರಣ ಅಸ್ತಿತ್ವಕ್ಕೆ ಬಂದ ನಂತರ ಮತ್ತು ಅದು ತೀರ್ಪು ನೀಡಿದ ಬಳಿಕ ಉಂಟಾಗಿರುವ ಕಾನೂನು ಸಮಸ್ಯೆಗಳ ಬಗ್ಗೆ ನಿಮಗೆಲ್ಲ ತಿಳಿದಿದೆ. ಕಾವೇರಿ ನದಿಪಾತ್ರದ ರೈತರಿಗೆ ಬೇಸಾಯ ಮಾಡಲು ಸಾಕಷ್ಟು ನೀರು ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಮಾನವೀಯತೆ ನೆಲೆಯಲ್ಲಿ ಕರ್ನಾಟಕ ಮತ್ತು |
| ಜರ್ಮನ್ನರು ನಗರವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ, ಸಿಕ್ಕ ಯಾವುದೇ ಅವಕಾಶವನ್ನೂ ಪೋಲು ಮಾಡದೆ, ಭವಿಷ್ಯದ ಪೀಳಿಗೆಗೂ ಸಂಪನ್ಮೂಲ ಉಳಿಯುವಂತೆ ನೋಡಿಕೊಂಡು ಒಂದು ಪಟ್ಟಣವನ್ನು ಕಟ್ಟುತ್ತಿದ್ದಾರೆ ಎಂದರೆ, ನಮಗೇಕೆ ಸಾಧ್ಯವಾಗಲಾರದು? ಇದಕ್ಕೆ ದೊರೆಯುವ ಏಕೈಕ ಉತ್ತರವೆಂದರೆ ಜನಸಂಖ್ಯೆ. ಜನಸಂಖ್ಯೆ ಹೆಚ್ಚಾದಂತೆ, ಅಭಿವೃದ್ಧಿಗೆ ಅಡಚಣೆಯಾಗುತ್ತದೆ, ಸಂಪನ್ಮೂಲದ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಹಣ ಮಾಡುವುದೇ ಏಕೈಕ ಉದ್ದೇಶವಾಗಿಬಿಡುತ್ತದೆ. ಭವಿಷ್ಯದ ಬಗೆ |
| ಬೆಂಗಳೂರು, ಸೆ.8: ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಸೆಪ್ಟೆಂಬರ್ 9 ರಂದು ಗುರುವಾರ ರಾತ್ರಿ 9.30 ರಿಂದ 1030 ಗಂಟೆಯವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಶಿಕ್ಷಕರ ಮಾಸಾಚರಣೆ ಮತ್ತು ಟಿ.ಬಿ.ಎಫ್ ಕಾರ್ಯಕ್ರಮಗಳು ಎಂಬ ವಿಷಯಗಳ ಬಗ್ಗೆ ಶಿಕ್ಷಣ ಸಂವಾದ ನೇರ ಫೋನ್ ಇನ್ ಕಾರ್ಯಕ್ರಮವು ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿಗಳು, ತಜ್ಞರು, |
| ಮೆಲ್ಬೋರ್ನ್, ಸೆ. 8 : ಐಪಿಎಲ್ ನ ತಂಡವೊಂದಕ್ಕೆ ಸೇರಿದ ಪ್ರಖ್ಯಾತ ಬ್ಯಾಟ್ಸ್ಮನ್ ಐಪಿಎಲ್ ಪಂದ್ಯಾವಳಿಯಲ್ಲಿ ಅನುಮಾನಾಸ್ಪದವಾಗಿ ಆಟವಾಡಿದ್ದು, ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಪ್ರಖ್ಯಾತ ಬ್ಯಾಟ್ಸ್ಮನ್ ಒಬ್ಬರು ಐಪಿಎಲ್ ನಲ್ಲಿ ಅನುಮಾನಾಸ್ಪದವಾಗಿ ಆಟವಾಡಿದ್ದಾರೆ. ಅವರ ನಡವಳಿಕೆಗಳನ್ನು ವಿವರಿಸುವುದು ಕಷ್ಟ ಸಾಧ್ಯವಾಗಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ ಎಂದು ದಿ |
| ನವದೆಹಲಿ, ಸೆ. 8 : ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮುಂಬರುವ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಪಟು ಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯವು 20 ಲಕ್ಷ ರುಪಾಯಿ ನಗದು ಬಹುಮಾನ ನೀಡಲಿದೆ. ಕ್ರೀಡಾ ಸಚಿವ ಮನೋಹರ ಸಿಂಗ್ ಗಿಲ್ ಈ ವಿಷಯವನ್ನು ಘೋಷಿಸಿದ್ದಾರೆ. ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುವಿಗೆ |
| ಗುಲ್ಬರ್ಗ, ಸೆ. 8 : ಇಂತಹ ಮಾನಗೆಟ್ಟ ಮುಖ್ಯಮಂತ್ರಿಯನ್ನು ದೇಶದಲ್ಲಿ ನಾನೆಂದು ನೋಡಿಲ್ಲ. ಇನ್ನೊಬ್ಬ ಹುಟ್ಟೋದು ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಗುಲ್ಬರ್ಗ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರುಣಾ ಪಾಟೀಲ್ ಪರ ಮಂಗಳವಾರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಯಡಿಯೂರಪ್ಪ ಬೆತ್ತಲಾಗುವ |
| ಮುಂಬೈ, ಸೆ.8:ವಿಶ್ವದ ಅತೀ ದೊಡ್ಡ ಉಕ್ಕು ತಯಾರಿಕಾ ಕಂಪೆನಿ ಆರ್ಸೆಲಾರ್ ಮಿತ್ತಲ್ ಮತ್ತು ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್ ಜಂಟಿಯಾಗಿ ಗಣಿಗಾರಿಕೆ ಕಂಪೆನಿಯೊಂದನ್ನು ಸ್ಥಾಪಿಸಲಿವೆ ಎಂದು ಪತ್ರಿಕಾ ವರದಿ ಹೇಳಿದೆ. ವರದಿಯ ಪ್ರಕಾರ ಸಹಯೋಗದ ಕಂಪೆನಿ ದೇಶದಲ್ಲಿ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರು ನಿಕ್ಷೇಪದ ಗಣಿಗಳನ್ನು ಗುತ್ತಿಗೆ ಪಡೆಯಲಿದೆ ಎಂದು ಇಂಡಿಯಾ ಬುಲ್ಸ್ ನ ಕಾರ್ಯಕಾರಿ |
| ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ 2008-09ನೇ ಸಾಲಿನ ಅಧ್ಯಕ್ಷರಾಗಿದ್ದ ಹಿರಿಯ ನಿರ್ದೇಶಕ ಎಚ್ ಆರ್ ಭಾರ್ಗವ ಅವರನ್ನು ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಪ್ರಣಯ ರಾಜ ಶ್ರೀನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೆ ಕರ್ನಾಟಕ ಸರ್ಕಾರ ಭಾರ್ಗವ ಅವರನ್ನು ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ |